ಕಾಂತಿಹೀನ ಪಡುನೇಸರ ಬೇಸರ ಕಳೆದು
ಮೂಡಲದಿಕ್ಕಿನಲಿ ಕಾಂತಿವೆತ್ತ ರವಿಯಾದ
ನೆಗೆಯುವ ಕೆಂದೂಳಿ ಹೊತ್ತು ತಂದು
ನೀಲಿ ಬಾನಿಗೆ ಕಿತ್ತಳೆ ಬಣ್ಣ ಬಳಿದ
ಮುಗಿಲ ಖೈದಿಯಾಗಿ ಬದುಕು ಬೇಡವೆಂದು
ಮಳೆರಾಯನವನು ಮುಸುಲಧಾರೆಯಾದ
ಹನಿ ಹನಿ ಮುಂಗಾರು ತಂದು
ಇಳೆಯ ಧಗೆಯ ಲಘುವಾಗಿಸಿದ
ಹನಿಯು ಬರಿದಾಗಿ ಚಿಂತೆ ಕಾಡಲು
ಬಿರಿಯುವ ಬಿಸಿಲ್ಗುದುರೆಯಾದ
ಸಪ್ತ ವರ್ಣಗಳ ಚಿತ್ತಾರ ತಂದು
ರಂಗು-ರಂಗಿನ ಮಳೆಬಿಲ್ಲು ರಚಿಸಿದ
ಅಮಾವಾಸ್ಯೆ ಇರುಳ ಕರಿನೆರಳಿಗೆ ಬೆಚ್ಚಿ ಬಿದ್ದು
ಶಶಾಂಕನವನು ನಾಗಲೋಟದ ಕೋಲ್ಮಿಂಚಾದ
ಬೆಳ್ಳಿ ಕೊಡೆ ಹೊತ್ತು ತಂದು
ಕಪ್ಪಡರಿದ ಕಾರ್ಮುಗಿಲಿಗೆ ಕಿಚ್ಚನಚ್ಚಿದ
0 comments:
Post a Comment