Monday, May 17, 2010

ಮೇ ೨೩ರ "ನಾಟಕ ಚೈತ್ರ" – ೨ ಅತ್ಯುತ್ತಮ ನಾಟಕಗಳು!!


ಮೇ ೨೩ರ "ನಾಟಕ ಚೈತ್ರ"ದ ಬಗ್ಗೆ ನಿಮಗೆ ತಿಳಿದಿದೆಯಲ್ಲವೇ? ರಂಗಭೂಮಿ ಹವ್ಯಾಸಿ ಕಲಾವಿದರ ತಂಡ ನಿಮಗೆಂದು ೨ ನಾಟಕಗಳನ್ನು ಪ್ರಸ್ತುತಪಡಿಸುತ್ತಿದೆ. ಬೇ ಏರಿಯಾದ ಹೆಸರಾಂತ ನಿರ್ದೇಶಕಿ ಶರ್ಮಿಳ ವಿದ್ಯಾಧರರವರ ನಿರ್ದೇಶನದಲ್ಲಿ ಹಲವು ಪ್ರವೀಣ ಮತ್ತು ಪಳಗಿದ ಕಲಾವಿದರ ಜೊತೆ ಹೊಸ ಪ್ರತಿಭೆಗಳ ಸಮ್ಮಿಲನ ಈ ಕಾರ್ಯಕ್ರಮದ ವಿಶೇಷ.

ನಮ್ಮೊಳೊಗೊಬ್ಬ ನಾಜೂಕಯ್ಯ
‘ಮಾಯಾಮೃಗ’, ‘ಮುಕ್ತಾ ಮುಕ್ತಾ’ ಮತ್ತು ‘ಮನ್ವಂತರ’ಗಳಂಥಾ ಮರೆಯಲಾಗದ ಧಾರಾವಾಹಿಗಳನ್ನು ಕೊಟ್ಟ ಟಿ.ಎನ್. ಸೀತಾರಾಮ್ ಅವರು ಬರೆದ ಈ ನಾಟಕ, ನಿಷ್ಠೆಯಿ೦ದ ಯಶಸ್ಸು ಗಳಿಸಬೇಕೆಂಬ ಓರ್ವ ಉದ್ಯಮಿಯ ಪಯಣದಲ್ಲಿ ಭೃಷ್ಟ ವ್ಯವಸ್ಥೆಯ ಅನುಯಾಯಿಗಳು ಎಸೆಯುವ ಸವಾಲುಗಳು, ಆತ ಎದುರಿಸುವ ದ್ವಂದಗಳ ಮಾರ್ಮಿಕ ಘಟನೆಗಳನ್ನು ನಿರೂಪಿಸುತ್ತದೆ. ಛಲವಾದಿ ನಾಯಕ ದೃಢತೆಯಿ೦ದ ಆ ಕದನವನ್ನು ಗೆಲ್ಲಬಲ್ಲನೆ ಅಥವಾ ತಾನು ನ೦ಬಿದ ಆದರ್ಶಗಳನ್ನು ಗಾಳಿಗೆ ತೂರಿ ಸೋತು ಶರಣಾಗುವನೆ?
ಬನ್ನಿ, ವೀಕ್ಷೀಸಿ...ನಮ್ಮೆಲ್ಲರ ಮನದಾಳದಲ್ಲಿಯೂ ಓರ್ವ ನಾಜೂಕಯ್ಯನಿದ್ದಾನೋ ಎಂದು ಶೋಧಿಸಿ.....

ಕೊರಿಯಪ್ಪನ ಕೊರಿಯೋಗ್ರಫಿ
ಹನಿಗವನದ ಸಾಮ್ರಟರ ಎಂದು ಖ್ಯಾತರಾಗಿರುವ ಕವಿ ಎಚ್. ದುಂಡಿರಾಜ್ ಅವರು ರಚಿಸಿರುವ ಅನೇಕ ನಾಟಕಗಳಲ್ಲಿ ಕೊರಿಯಪ್ಪನ ಕೊರಿಯೋಗ್ರಫಿ ತಿಳಿ ಹಾಸ್ಯವನ್ನು ಬಳಸಿ ತಮ್ಮದೆ ಆದ ಸಾಹಿತ್ಯಲೋಕಕ್ಕೆ ಒಂದು ವಿಡಂಬನಾತ್ಮಕ ನೋಟವನ್ನು ಬೀರಿದ್ದಾರೆ. "ಅನುರಾಗ" ಪತ್ರಿಕೆಯವರು ಸಾಹಿತಿ ಕೊರಿಯಪ್ಪನವರನ್ನು ಸಂದರ್ಶನ ಮಾಡಲು ಇಚ್ಚಿಸಿದ್ದು ಆತನಿಗೆ ಒದಗಿ ಬರುವ ಅನಿರೀಕ್ಷಿತ ಅದೃಷ್ಟ. ಸಂದರ್ಶನ ನೀರೀಕ್ಷೆ ಕೊರಿಯಪ್ಪನ ಮನೆಯಲ್ಲಿ ಉಂಟು ಮಾಡುವ ಸಡಗರ ಹಾಗು ಸಂದರ್ಶನದ ಸಮಯದಲ್ಲಿ ಉಂಟಾಗುವ ಅನೇಕ ಹಾಸ್ಯಮಯ ಸನ್ನಿವೇಶಗಳಿಂದ ಈ ನಾಟಕವು ರಂಜನೀಯವಾಗಿದೆ

0 comments: