Thursday, July 23, 2009

ಯಾವ ಮೋಹನ ಮುರಳಿ ಕರೆಯಿತು

Whale Watching @ Monterrey Bay, CA captured in my D-SLR

ಮಾಂಟೆರೆ ಕೊಲ್ಲಿಗೆ "Whale Watching" ಗೆ ಹೋದಾಗ ಆ ಬ್ರುಹದಾಕಾರದ ತಿಮಿಂಗಲವ ಕಂಡು ಹೀಗನ್ನಿಸದೇ ಇರಲಿಲ್ಲ!!
(ದೊಡ್ಡ ಚಿತ್ರಪಟಕ್ಕೆ ಫೋಟೊ ಮೇಲೆ ಕ್ಲಿಕ್ಕಿಸಿ)







ಬಾನೆತ್ತರೆಕೆ ಚಿಮ್ಮುತಾ
ದೊಡ್ಡ ದನಿಯ ಉಸಿರೆಳೆಯುತಾ
ಕುಣಿಯುತಾ, ನಲಿಯುತಾ
ಯಾಕೆ ಓಡಿ ಹೋಗುವೆ ನೀ ಬಿಂಕದ ಸಿಂಗಾರಿ

ದಿಗಂತದ ಮಿತಿ ಅಳೆಯುವ ಆಸೆಯೇ?
ಕ್ಷಿತಿಜದ ವ್ಯಾಪ್ತಿ ತಿಳಿಯುವ ಹುಚ್ಚು ಹಂಬಲವೇ?
ಅಥವಾ
ಬಾನಂಚಿನ ಎಲ್ಲೆ ಮೆಟ್ಟುವ ಕಲ್ಪನೆಯೇ?
ಓ ಮತ್ಸ್ಯ ಸುಂದರಿ...

ನಮ್ಮಯ ಕಂಡು
ದುಷ್ಟರಿಂದ ದೂರ ಇರು ಎಂದು ನೆನೆದೆಯಾ?
ಮುಟ್ಟದಿರು ನೀ ನನ್ನ,
ಮುಟ್ಟಿ ಮಲಿನ ಮಾಡದಿರು ನನ್ನ ಓ "ಮನುಜ ಕ್ರಿಮಿ"
ಎಂದು ಶಪಥ ಮಾಡಿದೆಯಾ?
ನೀ ಹಂಸ ವೈಯ್ಯಾರಿ

ನಿನ್ನಯ ಈ ಹಾರಿಕೆಯ ಓಟವ ನೋಡಿದರೆ
ನನಗೊಂದೇ ಹಾಡು ನೆನಪಾಗುವುದು
"ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಇರುವದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೇ ಜೀವನ "
ನಿನ್ನಲಿ ನನ್ನಯ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಅಪೇಕ್ಷೆ
ಅದೇ ಹಾಡು, ಅದೇ ಪ್ರಶ್ನೆ
ಅದೇ ಮಾತು, ಅದೇ ಮೌನ,
ಉತ್ತರ ಮಾತ್ರ ದಿಟ ಶೂನ್ಯ


Saturday, July 12, 2008

Colorodo ನದಿ ನಿರ್ಮಿಸಿದ "ವಿಸ್ಮಯಲೋಕ"


(ದೊಡ್ಡ ಚಿತ್ರಪಟಕ್ಕೆ ಫೋಟೊ ಮೇಲೆ ಕ್ಲಿಕ್ಕಿಸಿ)

ಜುಲೈ 4 2008: "ಗ್ರಾಂಡ್ ಕಾನ್ಯನ್"
ಮೇಲಿನ ಚಿತ್ರಪಟದಲ್ಲಿ ವ್ಯಕ್ತಿಯೋರ್ವನ ಮುಖದಂದಿರುವ ನಿಸರ್ಗ-ನಿರ್ಮಿತ ಕಲ್ಲು ಮಾತಾಡಿದಂತೆ ಭಾಸವಾದಾಗ ಹೀಗನ್ನಿಸದೇ ಇರಲಿಲ್ಲ...

ಚಿಮ್ಮಿ ಬಂದ ಸೂರ್ಯನೊಬ್ಬ
Grand Canyon ದ್ರುಶ್ಯ ವೈಭವವ
ಬೆಳಗಿಸಲು...
ಆಹ್-ಊಹ್ ಉದ್ಗಾರ-ಜಯಘೋಷಗಳ
ಮೊಳಗಿಸಲು...

ಮನದೊಳು ಮೂಡಿತ್ತಲ್ಲಿ ಸಂತಸಭಾವ

ಆಕಾಶಕ್ಕೆ ಏಣಿ ಹಾಕಲೇ..
ಹಕ್ಕಿಯಾಗಿ ಹಾರಲೇ..
ಅಂಚಿನಿಂದ ಅಂಚಿಗೆ ನೆಗೆಯಲೇ..
ಮಾತಾಡಲೊಲ್ಲೆಯಾ ವಿಸ್ಮಯಲೋಕವೇ?

ಕೊಲೊರೊಡೊ ನದಿಗೆ ಕಾದಿತ್ತಲ್ಲಿ ನೂರೆಂಟು ಪ್ರಶ್ನೆಗಳು

ಆಗಸದೊಂದಿಗೆ ಬಿರುಕೇ?
ಇಳೆಯೊಡನೆ ಒಡಕೇ?
ಯಾಕೀ ಮುನಿಸು.
ಯಾಕೀ ದಿರಿಸು..
ಯಾಕೀ ಭಗೀರಥ ಪ್ರಯತ್ನ...

ಮನಸ್ತಾಪವ ತೋರಿ
ಭೂ-ಗರ್ಭವ ಸೀಳಿ
ಭಿನ್ನಾಭಿಪ್ರಾಯವ ಜಗಕೆ ಸಾರಿ
ಪ್ರುಥ್ವಿಯೊಡಲ ಛಿದ್ರಿಸಿ
ಯಾಕೀ ಹಾವ!!
ಯಾಕೀ ಭಾವ!!!


(ದೊಡ್ಡ ಚಿತ್ರಪಟಕ್ಕೆ ಫೋಟೊ ಮೇಲೆ ಕ್ಲಿಕ್ಕಿಸಿ)

Monday, June 30, 2008

ಮರಳಿ ಬಂದ ಜೋಗದ ಗತ ವೈಭವ !!!



Life's a great leveler, opines my friend Yogi

ಮಲೆನಾಡಿಗೆ
ಮಧು ಮಗಳಿಗೆ
ಚುರುಕು ಮುಟಿತೇ ನಿನ್ನಿಂದ
ಮುಂಗಾರು ಮಳೆಯೇ...

ಜೋಗದ ಸವಿಯಲಿ
ನೆನೆ-ನೆನೆದು ಮಿಂದೆದ್ದ
ಕಂಗಳೇ ಧನ್ಯ-ಪೂರ್ಣ
ಜೀವನವದೇ ಸಂಪೂರ್ಣ

ಜೋಗದ ಸಿರಿ ಬೆಳಕಿನಲ್ಲಿ
ಗತ ವೈಭವವ ಮರಳಿ ತಂದ
ನಿನಗಿದೋ ಕೋಟಿ ವಂದನೆ
ಮುಂಗಾರು ಮಳೆಯೇ...

ಮೈ-ಮನ ಮರೆತು
ಎವೆಯಿಕ್ಕದೇ ನೋಡು ನೀ ದಿನಂಪ್ರತಿ
ಚಿರಾಯುವಾಗಲೀ..ನೂರ್ಕಾಲ ಬಾಳಲೀ ಅಳಿವವರೆಗೆ ಜೀವ ಸಂತತಿ
ಮೈದುಂಬಿದ ಜೋಗ
ಹ್ರುದಯ ಬಡಿತದ ಆ ವೇಗ !!!

Labels:

Friday, May 30, 2008

"ಚಾಣಾಕ್ಯ" ಅರುಣ್ ಜೇಟ್ಲಿ - ಭಾ.ಜ.ಪಾ.ದ "ಕರ್ನಾಟಕ" ಗೆಲುವಿನ ರೂವಾರಿಯಾದದ್ದು ಹೇಗೆ?




Jaitley has repeated a success he found in Madhya Pradesh in 2003 with Uma Bharti, with Narendra Modi in Gujarat in 2002 and in 2007 and with Nitish Kumar in Bihar in 2005. Although the Congress has fared better in Karnataka than it did in 2004, Jaitley’s tactics woven into the Yeddyurappa-led campaign ensured that the party — and Jaitley pointed this out this afternoon — has come up trumps in the state where the BJP was a non-entity 15 years ago.

The Congress has lost 12 Assembly elections since 2004. Jaitley has marshalled the victories for the BJP in four large states since the UPA came to power in New Delhi.

For a politician who has not personally contested a mass-level election since he was the leader of the Delhi University Students Union, that is quite an achievement.


---- ಸುಜನ್ ದತ್ತಾ - ದಿ ಟೆಲಿಗ್ರಾಫ್ ಗೆ ಬರೆದ ಅಂಕಣ ನನ್ನ ಗಮನ ಸೆಳೆದಾಗ ಇದರ ಬಗ್ಗೆ ವಿಶ್ಲೇಷಿಸುವ ಒಂದು ಸಣ್ಣ ಪ್ರಯತ್ನ

  1. ಮೊಟ್ಟ ಮೊದಲನೆಯ ದಿಟ್ಟ ನಿರ್ಧಾರ ಬಿ.ಎಸ್.ಯೆಡ್ಯೂರಪ್ಪನವರನ್ನು "ಮುಖ್ಯ ಮಂತ್ರಿ" ಅಭ್ಯರ್ಥಿಯಾಗಿ ಘೋಷಿಸಿದ್ದು. ಕಾಂಗ್ರೆಸ್ ಬಿ.ಜೆ.ಪಿ ಯನ್ನು "ಲಿಂಗಾಯತ"ರ ಪಕ್ಷವೆಂದು ಬಿಂಬಿಸಿ ಒಕ್ಕಲಿಗ ಮತಗಳನ್ನು ಸೆಳೆಯಲು ಪ್ರಯತ್ನಿಸುತ್ತಿದ್ದನ್ನು ಬಹುಬೇಗ ಮನಗೊಂಡ ಜೇಟ್ಲಿ "ಒಕ್ಕಲಿಗ-ಲಿಂಗಯತ" ಗಣಿತವನ್ನು ಚಾಣಾಕ್ಶತನದಿಂದ ಸರಿದೂಗಿಸಿ ತಾನು ಏಕೆ ಬಿ.ಜೆ.ಪಿ ಯ "Stratagist" ಎಂಬುದನ್ನು ಮತ್ತೆ ಸಾಬೀತುಪಡಿಸಿದರು. ಯಡ್ಡಿ-ಅನಂತ್ ಕುಮಾರ್ ನಡಿವಿನ ಆಂತರಿಕ ಕಲಹ ಶಮನ ಮಾಡಿ ನಿಯತಕಾಲಿಕ ಜಾಹಿರಾತುಗಳಲ್ಲಿ ತ್ರಿಮೂರ್ತಿಗಳಂತೆ ಯಡ್ಡಿ-ಅನಂತ್ ಕುಮಾರ್-ಸದಾನಂದ ಗೌಡರನ್ನು (ಲಿಂಗಾಯತ-ಬ್ರಾಹ್ಮಣ-ಒಕ್ಕಲಿಗ) ಜನತೆಯ ಮುಂದಿಟ್ಟದ್ದು ಇನ್ನೊಂದು ನಿದರ್ಶನ.
  2. ಮಲ್ಲೇಶ್ವರಂನ ಭಾ.ಜ.ಪಾ. ಕಛೇರಿಯಲ್ಲಿ Media cell, publicity cell, Issue cell, Candidate cell ಹೀಗೆ ಪ್ರತ್ಯೇಕ ವ್ಯವಸ್ಥೆಯನ್ನು ನಿರ್ಮಿಸಿ ಅಲ್ಲಿನ ಕ್ಯಾಪ್ಟ್ನನ್-ಕೋಚ್ ರೀತಿಯಲ್ಲಿ ಕೆಲಸ ಮಾಡಿದ್ದು. ಐ.ಟಿ/ಬಿ.ಟಿ ಮತದಾರರನ್ನು ಸೆಳೆಯಲು ಅಂತರ್ಜಾಲಕ್ಕೆ ಲಗ್ಗೆ ಇಟ್ಟು http://www.bjpkarnataka.org/ ನಿರ್ಮಿಸಿದ್ದು
  3. ಚುನಾವಣಾ ಹುರಿಯಾಳುಗಳನ್ನು ಅನ್ಯ ಪಕ್ಷಗಳಿಗಿಂತ ೧೫ ದಿನ ಮುಂಚಿತವಾಗಿ ಘೋಷಿಸಿದ್ದು ಹಾಗೂ ಭಿನ್ನಮತವನ್ನು ಹತ್ತಿಕ್ಕಲು ಉಪಾಯ ಹೆಣೆದದ್ದು ಭಾ.ಜ.ಪಾ ಗೆ "15 Day Advantage" ದೊರಕಿಸಿಕೊಟ್ಟದ್ದು ನಿಸ್ಸಂದೇಹವಾದ ಅಂಶ.
  4. ಭಾ.ಜ.ಪಾ.ದ "ಹಿಂದುತ್ವ" ವನ್ನಾಗಲಿ, ವಚನಭ್ರಷ್ಟತೆಯನ್ನಾಗಲೀ ಹೆಚ್ಚು ಬಿಂಬಿಸದೇ ಕೇಂದ್ರಾಡಳಿತದ ಬೆಲೆ ಏರಿಕೆ, ಕರ್ನಾಟಕದಲ್ಲಿ ಹೆಚ್ಚುತ್ತಿರುವ ಭಯೋತ್ಪದನೆಯ ಮೂಲದ ಬಗ್ಗೆ ಜನತೆಯ ಗಮನವನ್ನು ಸೆಳೆದುದು ಇನ್ನೊಂದು ಗಮನಾರ್ಹ ಅಂಶ.
  5. ಸಾರೆಕೊಪ್ಪ ಬಂಗಾರಪ್ಪ ಶಿಕಾರಿಪುರದಿಂದ ಸ್ಪರ್ಧಿಸುವ ವಿಷಯ ಮನದಟ್ಟಾದ ಯಡ್ಡಿ ತುಮಕೂರು ಅಥವಾ ಕೊಪ್ಪಳದಿಂದ ಚುನಾವಣೆ ನಿಲ್ಲಲು ಗಂಭೀರ ಚಿಂತನೆ ನಡೆಸುತ್ತಿದ್ದರೆ, ಅದನ್ನು ನಯವಾಗಿ ತಿರಸ್ಕರಿಸಿದವರು ಜೇಟ್ಲಿ. ಮುಖ್ಯಮಂತ್ರಿ ಅಭ್ಯರ್ಥಿಯೇ ಹೀಗೆ ಧ್ಯರ್ಯಗೆಟ್ಟರೆ ಮತದಾರರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆಯೆಂದು ಶಿಕಾರಿಪುರದಿಂದ ಮಾತ್ರ ಸ್ಪರ್ಧಿಸುವಂತೆ ಆದೇಶಿಸಿದವರು ಜೇಟ್ಲಿ.
  6. ಭಾ.ಜ.ಪಾ ಪ್ರಚಾರಕ್ಕಾಗಿ ಕೇಂದ್ರದ ಘಟಾನುಘಟಿ ನಾಯಕುಗಳಾದ ಲಾಲ್ ಕೄಷ್ಣ ಅದ್ವಾನಿ, ಸುಷ್ಮ ಸ್ವರಾಜ್, ನರೇಂದ್ರ ಮೋದಿ ಅವರನ್ನು ಶಿಕಾರಿಪುರಕ್ಕೆ ಕರೆಸಿ ಬಿರುಸಿನ ಪ್ರಚಾರ ಮಾಡಿ ಯಡ್ಡಿಗೆ ಬೆನ್ನೆಲುಬಾಗಿ ನಿಂತದ್ದು ಜೇಟ್ಲಿ. ಇದನ್ನು ಕಾಂಗ್ರೆಸ್ ಪಾಳೆಯಕ್ಕೆ ತುಲನೆ ಮಾಡಿ ನೋಡಿದಾಗ ಪ್ರಧಾನಿಯವರ ಒಂದು ಒಳಾಂಗಣ ಸಭೆ, ಮ್ಯಾಡಮ್ ಗಾಂಧಿಯ 6 ಮತ್ತು ರಾಹುಲ್ ಗಾಂಧಿಯ ತುಸು ಗಂಟೆಗಳ ನಿರಾಶದಾಯಕ ಪ್ರಚಾರ
  7. ಎರಡನೇ ಮತ್ತು ಮೂರನೇ ಹಂತದ ಮತದಾನಕ್ಕೆ ಭಾ.ಜ.ಪಾ ಕೇಂದ್ರ ಕಛೇರಿಯನ್ನು ಬೆಂಗಳೂರಿನಿಂದ ಹುಬ್ಬಳ್ಳಿಗೆ ಸ್ಥಳಾಂತರಿಸಿದ ನಿರ್ಧಾರದ ಹಿಂದೆ ಜೇಟ್ಲಿಯವರ "ಮಾಸ್ಟರ್ ಮೈಂಡ್" ಇತ್ತು ಎನ್ನುವುದು ಭಾ.ಜ.ಪಾ ಕಾರ್ಯಕರ್ತರ ಆಂಬೋಣ.
  8. ಮೊದಲನೇ ಹಂತದ ಮತದಾನಕ್ಕೆ ಕೆಲವೇ ದಿನಗಳಿರುವಾಗ ಶೋಭಾ ಕರಂದಾಂಙ್ಲೆಯ ಹೆಸರನು ಶೋಭಾ ಮೋನಪ್ಪಗೌಡ ಮಾಡಿ ಒಕ್ಕಲಿಗ ಮತಗಳನ್ನು ಸೆಳೆದು ಬೆಂಗಳೂರು ಹೆಬ್ಬಾಗಿಲಾದ ಯಶವಂತಪುರವನ್ನು ಭಾ.ಜ.ಪಾ.ಗೆ ದಕ್ಕಿಸಿಕೊಟ್ಟ ಹಿರಿಮೆ. ಕಾಂಗ್ರೆಸ್ ಅಭ್ಯರ್ಥಿ ಎಸ್. ಟಿ. ಸೋಮಶೇಖರ್ ಮತ್ತು ಶೋಭ ನಡುವಿನ ಜಯದ ಅಂತರ ಕೇವಲ 1,082. ಅಲ್ಪ ಮತಗಳ ಈ ವಿಜಯದಲ್ಲಿ ಜೇಟ್ಲಿ ಮ್ಯಾಜಿಕ್ ಕೆಲಸ ಮಾಡಿರುವುದಂತೂ ನಿಜ.
  9. ಮಹದೇವಪುರ ಮೀಸಲು ಕ್ಶೇತ್ರದಲ್ಲಿ ಕಾಂಗ್ರೆಸ್ ಅಭ್ಹ್ಯರ್ಥಿ ತನ್ನ ಸಾಂಪ್ರದಾಯಕ ಮತಗಳ ಓಲೈಸಿಕೊಳ್ಳಲು ಶತಾಯ-ಗತಾಯ ಪ್ರಯತ್ನಿಸುತ್ತಿದ್ದರೆ, ಭಾ.ಜ.ಪಾ.ದ ಅರವಿಂದ ಲಿಂಬಾವಳಿ ಜೇಟ್ಲಿಯ ಮಾರ್ಗದರ್ಶನದ ಅನುಗುಣವಾಗಿ ಐ.ಟಿ.ಪಿ.ಎಲ್ ನಲ್ಲಿ ರಸ್ತೆ-ನೀರು-ಟ್ತ್ರಾಫಿಕ್ ಹೆಸರಿನ ಮೂಲಭೂತ ಸೌಕರ್ಯಗಳ ನೆಪದಲ್ಲಿ Software ಮತಗಳ ಭೇಟೆಯಾಡುತಿದ್ದರಂತೆ.

Wednesday, March 26, 2008

ಹೀಗೇ ಸುಮ್ಮನೆ...




ಹೀಗೇ ಸುಮ್ಮನೆ...
ಅಡಗಿಸಿಕೊಳ್ಳಲಾಗದೆ
ಅರಗಿಸಿಕೊಳ್ಳಲೂ ಆಗದೆ
ಎಲ್ಲವ ಹೇಳಿ
ಮನದ ದುಗುಡವ ಆರಿಸಿಕೊಳ್ಳೋಣವೆಂದರೆ

ಹೀಗೇ ಸುಮ್ಮನೆ...
ಶೂನ್ಯದತ್ತ ದ್ರುಷ್ಟಿ ನೆಟ್ಟು
ಚಿತ್ತ-ಚಂಚಲ ಮನವ ಕದಡಿ-ಕಲಕಿ
ಹೆಕ್ಕಿ ತೆಗೆದ
ಪದಮಾಲೆಯ ಹೆಸರು
ಭಾವನೆಗಳ ನಡುವೆ ಸಂಗರ್ಷ

ಒತ್ತಡ, ಗಲಿಬಿಲಿ, ಕಳವಳಗಳು
ಒಂದು ರೀತಿ ಸೆರೆಮನೆಯಲ್ಲವೆ?
ಅರಿಷಡ್ವರ್ಗಗಳ
ಅನಾಯಾಸವಾಗಿ ಗೆದ್ದರಲ್ಲವೇ
ಮನೆ-ಮನ ಚಂದದ ಅರಮನೆ

Labels:

Monday, March 17, 2008

ಕೃಷ್ಣ ಬಂದಾರಪ್ಪೊ...ದಾರಿ ಬಿಡಿ...Sideಗೆ ಹೋಗಿ...



http://bahumukhi.blogspot.com/2008/03/blog-post_15.html

ನಮ್ಮ ಬ್ಲಾಗ್ ಮಿತ್ರರಾದ "ಬಹುಮುಖಿ ತ್ರಾಸಿ" ಅವರ "ರಾಜಕೀಯ ವಿಶ್ಲೇಷಣೆ" ಓದಿದ ಮೇಲೆ ಅದರಿಂದ ಪ್ರೇರಿತವಾಗಿ ಈ ಲೇಖನ -

ಕ್ಷೇತ್ರ ಪುನರ್ ವಿಂಗಡನೆ ಪ್ರಸಕ್ತ ಕರ್ನಾಟಕ ರಾಜ್ಯದಲ್ಲಿ ನಡೆಯುವ ಚುನಾವಣೆಯಲ್ಲಿ ಮಹತ್ತರ ಪಾತ್ರ ವಹಿಸುವುದು ನಿಸ್ಸಂದೇಹವಾದ ಅಂಶ. ಮೇಲಿನ ಲೇಖನದಲ್ಲಿ ತ್ರಾಸಿರವರು ಯಾವ ಮುಖಂಡ ಯಾವ ಕ್ಷೇತ್ರವನ್ನು ಕಳೆದುಕೊಳ್ಳುತ್ತಾರೆ ಎಂಬುದರ ಬಗ್ಗೆ ಸವಿವರವಾಗಿ ಸಚಿತ್ರ ವರದಿ ಕೊಟ್ಟಿರುತ್ತಾರೆ. ನಿಜಕ್ಕೂ ರಾಜಕೀಯ ಆಸಕ್ತರಿಗೆ ಅದು ಉಪಯುಕ್ತವಾದ ಸುದ್ದಿ.

ಹಿಮಾಚಲ ಪ್ರದೇಶ, ಗುಜರಾತ್, ಅಸ್ಸಾಂ ನಲ್ಲಾದ ಕಾಂಗ್ರೆಸ್ ಸೋಲನ್ನು ನೀವು ಸ್ಮರಿಸಬಹುದು. ಅತಿ ಶೀಘ್ರದಲ್ಲಿ ಚುನಾವಣೆ ನಡೆಯುವಂತಿರುವ ಕರ್ನಾಟಕಕ್ಕೆ ಕಾಂಗ್ರೆಸ್ ಹೈ-ಕಮಾಂಡ್ ಎಸ್. ಎಮ್. ಕೃಷ್ಣರನ್ನು ಮಹಾರಾಷ್ಟ್ರದಿಂದ "ರಫ್ತು" ಮಾಡಿರುವುದು ಹೈ-ಕಮಾಂಡ್ ನ ದೂರದ್ರುಷ್ಟಿತನವನ್ನು ತೋರಿಸುತ್ತದೆ. ಇದರ ಜೊತೆಯಲ್ಲೇ ರಾಹುಲ್ ಗಾಂಧಿಯವರ "Discover India" ಪ್ರವಾಸ ಒರಿಸ್ಸಾದಿಂದ ಕರ್ನಾಟಕದತ್ತ ಮುಖ ಮಾಡಿರುವುದು ಸಹ ಸೋನಿಯ ಗಾಂಧಿಯವರ ರಾಜಕೀಯ ನೈಪುಣ್ಯತೆಯೇ?

16 ಇದ್ದ ಬೆಂಗಳೂರು ನಗರಾಂತರ ಜಿಲ್ಲೆಯ ಕ್ಷೇತ್ರವಾರು ಲೆಕ್ಕಾಚಾರ ಕ್ಷೇತ್ರ ಪುನರ್ ವಿಂಗಡನೆ ದೆಸೆಯಿಂದ 28 ಆಗಿದೆ. ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಐಟಿ-ಬಿಟಿ ಕ್ಷೇತ್ರದಲ್ಲಿ Simply Marvelous Krishna ಎಂದೇ ಹೆಚ್ಚು ಜನಪ್ರಿಯ. ಈ ಬ್ರಾಂಡ್ ಇಮೇಜ್ ನ್ನು ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸದೆ Tier 2 ಮತ್ತು Tier 3 ನಗರಗಳಾದ ಮಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿಯಲ್ಲೂ ಹಬ್ಬಿಸಿ ಹೆಚ್ಚು ಮತ ಕೀಳಬೇಕು, ಹೆಚ್ಚು ಕ್ಷೇತ್ರ ಗೆಲ್ಲಬೇಕು ಎಂಬುದು ಕಾಂಗ್ರೆಸ್ ವ್ಯೂಹರಚನೆ ಮತ್ತು ಯೋಜನೆಯನ್ನು ಸಾಧಿಸಲು ಅನುಸರಿಸುವ ನೀತಿಯಿರಬೇಕು.

ಕೃಷ್ಣ ಅದೇನು ಮೋಡಿ ಮಾಡ್ತಾರೆ - ಕಾದು ನೋಡೋಣ. ನಾವು ಇರ್ತೀವಿ, ಕರ್ನಾಟಕನೂ ಇರತ್ತೆ, ಸೋಮನಹಳ್ಳಿ ಮಲ್ಲಯ್ಯ ಕೃಷ್ಣರೂ ಇರ್ತಾರೆ.

ಚುರ್-ಮುರಿ ಮಿಂಚು

ಖರ್ಗೆ ಸಾಹೇಬ್ರು ತಲೆ ಮೇಲೆ ಟವಲ್ ಹೊದ್ಕೊಂಡು ಕೂತಿದ್ರೆ ಸಿದ್ದು ಬಾಕ್ಸಿಂಗ್ ರಿಂಗ್ ನಲ್ಲಿ (ಸಭೆ-ಸಮಾರಂಭಗಳಲ್ಲಿ) ಗುದ್ದಾಡಲಿಕ್ಕೆ ಸಖತ್ ಅಭ್ಯಾಸ ನಡೆಸಿದ್ದಾರಂತಲ್ಲಾ.

ಕಾಂಗ್ರೆಸ್ ಪಾಳೆಯದಲ್ಲಿ ೯ ಕ್ಕೂ ಹೆಚ್ಚು ಮುಖಂಡರು ಮುಖ್ಯಮಂತ್ರಿ ಗಾದಿಗೆ ಲಾಬಿ ಮಾಡುತಿದ್ದರೆ ನವಗ್ರಹಗಳೂ ಗಢ-ಗಢ ನುಡುಗಿದಂತವಲ್ಲಾ. ಮೊಯ್ಲಿ, ಷರೀಫ್, ಆಸ್ಕರ್-ಆಳ್ವ ಆದಿಯಾಗಿ ಹಲವು ನಾಯಕರು ಕೇಂದ್ರದಲ್ಲಿ ಟೆಂಟ್ ಹಾಕಿದ್ರೆ ಪ್ರಕಾಶ್ - "ನಂಗಂತೂ ಆ ಪೋಸ್ಟ್ ಚ್ಯಾನ್ಸೇ ಇಲ್ಲ" ಅಂತ ತೆಪ್ಪಗೆ ಕೂತಿದ್ದಾರಂತಲ್ಲಾ.

ಅತ್ತ ರೇಸ್ ಕೊರ್ಸ್ ರಸ್ತೆಯಿಂದ ಬಂದ ಸುದ್ದಿ - ದ್ಯಾವೇಗೌಡ್ರು ಪಕ್ಷದ ಕಛೇರಿಯಿಂದ ಕಾರ್ಯಕರ್ತರನೆಲ್ಲಾ ಓಡಿಸಿ ಮಕ್ಕಳೊಡಗೂಡಿ ಹೋಮ-ಹವನ ಮಾಡಿಸುವುದರಲ್ಲಿ ಸುಖಾಸುಮ್ಮನೆ ಬ್ಯುಸಿ ಇದಾರಂತೆ. ಕುಮಾರಣ್ಣ ತುಮಕೂರಿನಲ್ಲಿ ಚಪ್ಪಲಿಗಳ ಹಾರಾಟ ನಡೆದ ಸಭೆಯಿಂದ ನೇರವಾಗಿ ರೇಸ್ ಕೊರ್ಸ್ ರಸ್ತೆಗೆ ದೌಡಾಯಿಸಿರುವುದು ನೋಡಿ ಪಕ್ಕದ ಮನೆಯ ಗಾಂಧಿ-ನಗರದವರೆಲ್ಲಾ ಪುಕ್ಕಟೆ ಮನರಂಜನೆ ಪಡೆದರಂತಲ್ಲಾ.

ಇನ್ನು ನಮ್ "ಯಡ್ಡಿ-ಸದಾನಂದ" ಜೋಡಿ ಹೊಗೇನಕಲ್ ನಲ್ಲಿ ಹೊಗೆ ಆಡಿಸಿ ವಾಪಸ್ ಬಂದು ಅದೇನ್ ಮಾಡ್ತಿದಾರೆ ನೀವೆ ನೋಡಿ -

Labels:

Sunday, March 16, 2008

ಅಪ್ಪಿಕೊ ನನ್ನ, ತಬ್ಬಿಕೊ ನನ್ನ...



ಕಣ್ಮನ ತಣಿಸುವ
ಮೈ-ಮನ ಮುದಿಸುವ
ಸೊಂಪಾದ ಸಮ್ರುದ್ಧ ಕಾನನಗಳವು
ಊಹೆಗೂ ನಿಲುಕದ ಪ್ರಕ್ರುತಿ ದ್ರುಶ್ಯ ಸೌಂದರ್ಯವದು
ಇದೇನು ಕಾಲ್ಪನಿಕ ದ್ರುಶ್ಯವೇ?
ಕೆನ್ನೆ ಗಿಲ್ಲಿ ನೋಡಿಕೊಂಡೆನಲ್ಲಾ??

ಎಡ-ಬಲ ನೋಡಲು
ಹಚ್ಚ-ಹಸಿರು ಹಸಿ ಹಸಿ ಉಸಿರು
ಆಲಂಗಿಸಿಕೊಳ್ಳಲೇ ನಿನ್ನ?

ತಲೆ ಎತ್ತಿ ನೋಡಲು
ನಿತ್ಯನೂತನ ಗಿರಿಶಿಖರಗಳು
ಅಪ್ಪಿಕೊಳ್ಳಲೇ ನಿನ್ನ?

ತಲೆ ಇಳಿಸಿ ನೋಡಲು
ಕಸುವಾದ ಫಲವತ್ತಾದ ಭೂಸಾರ
ತಬ್ಬಿಕೊಳ್ಳಲೇ ನಿನ್ನ?

ಕಣ್ ಮುಚ್ಚಿ,ಕೈ ಚಾಚಿ ನಿಂತಿರೆ
ಹಿತ ನೀಡುವ ತಂಪಾದ ಮಂದ ಮಾರುತ
ರೋಮ-ರೋಮವನೂ ಎಬ್ಬಿಸುವ ಚಳಿಗಾಳಿಯ ಅಲೆ
ಆಹ್! ಬೆಟ್ಟದ ಮೇಲೊಂದು ಮನೆಯ ಮಾಡಲೇ?

ಹೊರಡಲಣಿಯಾಗಿ "ಟಾಟ" ಮಾಡಿದರೆ
ಮುಸಿ ಮುಸಿ ನಕ್ಕು
ಮತ್ತೆ ಕೈ-ಬೀಸಿ ಕರೆಯುವದೇ
ಕುದುರೆಮುಖ

Labels: