
http://bahumukhi.blogspot.com/2008/03/blog-post_15.html
ನಮ್ಮ ಬ್ಲಾಗ್ ಮಿತ್ರರಾದ "ಬಹುಮುಖಿ ತ್ರಾಸಿ" ಅವರ "ರಾಜಕೀಯ ವಿಶ್ಲೇಷಣೆ" ಓದಿದ ಮೇಲೆ ಅದರಿಂದ ಪ್ರೇರಿತವಾಗಿ ಈ ಲೇಖನ -
ಕ್ಷೇತ್ರ ಪುನರ್ ವಿಂಗಡನೆ ಪ್ರಸಕ್ತ ಕರ್ನಾಟಕ ರಾಜ್ಯದಲ್ಲಿ ನಡೆಯುವ ಚುನಾವಣೆಯಲ್ಲಿ ಮಹತ್ತರ ಪಾತ್ರ ವಹಿಸುವುದು ನಿಸ್ಸಂದೇಹವಾದ ಅಂಶ. ಮೇಲಿನ ಲೇಖನದಲ್ಲಿ ತ್ರಾಸಿರವರು ಯಾವ ಮುಖಂಡ ಯಾವ ಕ್ಷೇತ್ರವನ್ನು ಕಳೆದುಕೊಳ್ಳುತ್ತಾರೆ ಎಂಬುದರ ಬಗ್ಗೆ ಸವಿವರವಾಗಿ ಸಚಿತ್ರ ವರದಿ ಕೊಟ್ಟಿರುತ್ತಾರೆ. ನಿಜಕ್ಕೂ ರಾಜಕೀಯ ಆಸಕ್ತರಿಗೆ ಅದು ಉಪಯುಕ್ತವಾದ ಸುದ್ದಿ.
ಹಿಮಾಚಲ ಪ್ರದೇಶ, ಗುಜರಾತ್, ಅಸ್ಸಾಂ ನಲ್ಲಾದ ಕಾಂಗ್ರೆಸ್ ಸೋಲನ್ನು ನೀವು ಸ್ಮರಿಸಬಹುದು. ಅತಿ ಶೀಘ್ರದಲ್ಲಿ ಚುನಾವಣೆ ನಡೆಯುವಂತಿರುವ ಕರ್ನಾಟಕಕ್ಕೆ ಕಾಂಗ್ರೆಸ್ ಹೈ-ಕಮಾಂಡ್ ಎಸ್. ಎಮ್. ಕೃಷ್ಣರನ್ನು ಮಹಾರಾಷ್ಟ್ರದಿಂದ "ರಫ್ತು" ಮಾಡಿರುವುದು ಹೈ-ಕಮಾಂಡ್ ನ ದೂರದ್ರುಷ್ಟಿತನವನ್ನು ತೋರಿಸುತ್ತದೆ. ಇದರ ಜೊತೆಯಲ್ಲೇ ರಾಹುಲ್ ಗಾಂಧಿಯವರ "Discover India" ಪ್ರವಾಸ ಒರಿಸ್ಸಾದಿಂದ ಕರ್ನಾಟಕದತ್ತ ಮುಖ ಮಾಡಿರುವುದು ಸಹ ಸೋನಿಯ ಗಾಂಧಿಯವರ ರಾಜಕೀಯ ನೈಪುಣ್ಯತೆಯೇ?
16 ಇದ್ದ ಬೆಂಗಳೂರು ನಗರಾಂತರ ಜಿಲ್ಲೆಯ ಕ್ಷೇತ್ರವಾರು ಲೆಕ್ಕಾಚಾರ ಕ್ಷೇತ್ರ ಪುನರ್ ವಿಂಗಡನೆ ದೆಸೆಯಿಂದ 28 ಆಗಿದೆ. ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಐಟಿ-ಬಿಟಿ ಕ್ಷೇತ್ರದಲ್ಲಿ
Simply Marvelous Krishna ಎಂದೇ ಹೆಚ್ಚು ಜನಪ್ರಿಯ. ಈ ಬ್ರಾಂಡ್ ಇಮೇಜ್ ನ್ನು ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸದೆ Tier 2 ಮತ್ತು Tier 3 ನಗರಗಳಾದ ಮಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿಯಲ್ಲೂ ಹಬ್ಬಿಸಿ ಹೆಚ್ಚು ಮತ ಕೀಳಬೇಕು, ಹೆಚ್ಚು ಕ್ಷೇತ್ರ ಗೆಲ್ಲಬೇಕು ಎಂಬುದು ಕಾಂಗ್ರೆಸ್ ವ್ಯೂಹರಚನೆ ಮತ್ತು ಯೋಜನೆಯನ್ನು ಸಾಧಿಸಲು ಅನುಸರಿಸುವ ನೀತಿಯಿರಬೇಕು.
ಕೃಷ್ಣ ಅದೇನು ಮೋಡಿ ಮಾಡ್ತಾರೆ - ಕಾದು ನೋಡೋಣ. ನಾವು ಇರ್ತೀವಿ, ಕರ್ನಾಟಕನೂ ಇರತ್ತೆ, ಸೋಮನಹಳ್ಳಿ ಮಲ್ಲಯ್ಯ ಕೃಷ್ಣರೂ ಇರ್ತಾರೆ.
ಚುರ್-ಮುರಿ ಮಿಂಚುಖರ್ಗೆ ಸಾಹೇಬ್ರು ತಲೆ ಮೇಲೆ ಟವಲ್ ಹೊದ್ಕೊಂಡು ಕೂತಿದ್ರೆ ಸಿದ್ದು ಬಾಕ್ಸಿಂಗ್ ರಿಂಗ್ ನಲ್ಲಿ (ಸಭೆ-ಸಮಾರಂಭಗಳಲ್ಲಿ) ಗುದ್ದಾಡಲಿಕ್ಕೆ ಸಖತ್ ಅಭ್ಯಾಸ ನಡೆಸಿದ್ದಾರಂತಲ್ಲಾ.
ಕಾಂಗ್ರೆಸ್ ಪಾಳೆಯದಲ್ಲಿ ೯ ಕ್ಕೂ ಹೆಚ್ಚು ಮುಖಂಡರು ಮುಖ್ಯಮಂತ್ರಿ ಗಾದಿಗೆ ಲಾಬಿ ಮಾಡುತಿದ್ದರೆ ನವಗ್ರಹಗಳೂ ಗಢ-ಗಢ ನುಡುಗಿದಂತವಲ್ಲಾ. ಮೊಯ್ಲಿ, ಷರೀಫ್, ಆಸ್ಕರ್-ಆಳ್ವ ಆದಿಯಾಗಿ ಹಲವು ನಾಯಕರು ಕೇಂದ್ರದಲ್ಲಿ ಟೆಂಟ್ ಹಾಕಿದ್ರೆ ಪ್ರಕಾಶ್ - "ನಂಗಂತೂ ಆ ಪೋಸ್ಟ್ ಚ್ಯಾನ್ಸೇ ಇಲ್ಲ" ಅಂತ ತೆಪ್ಪಗೆ ಕೂತಿದ್ದಾರಂತಲ್ಲಾ.
ಅತ್ತ ರೇಸ್ ಕೊರ್ಸ್ ರಸ್ತೆಯಿಂದ ಬಂದ ಸುದ್ದಿ - ದ್ಯಾವೇಗೌಡ್ರು ಪಕ್ಷದ ಕಛೇರಿಯಿಂದ ಕಾರ್ಯಕರ್ತರನೆಲ್ಲಾ ಓಡಿಸಿ ಮಕ್ಕಳೊಡಗೂಡಿ ಹೋಮ-ಹವನ ಮಾಡಿಸುವುದರಲ್ಲಿ ಸುಖಾಸುಮ್ಮನೆ ಬ್ಯುಸಿ ಇದಾರಂತೆ. ಕುಮಾರಣ್ಣ ತುಮಕೂರಿನಲ್ಲಿ ಚಪ್ಪಲಿಗಳ ಹಾರಾಟ ನಡೆದ ಸಭೆಯಿಂದ ನೇರವಾಗಿ ರೇಸ್ ಕೊರ್ಸ್ ರಸ್ತೆಗೆ ದೌಡಾಯಿಸಿರುವುದು ನೋಡಿ ಪಕ್ಕದ ಮನೆಯ ಗಾಂಧಿ-ನಗರದವರೆಲ್ಲಾ ಪುಕ್ಕಟೆ ಮನರಂಜನೆ ಪಡೆದರಂತಲ್ಲಾ.
ಇನ್ನು ನಮ್ "ಯಡ್ಡಿ-ಸದಾನಂದ" ಜೋಡಿ ಹೊಗೇನಕಲ್ ನಲ್ಲಿ ಹೊಗೆ ಆಡಿಸಿ ವಾಪಸ್ ಬಂದು ಅದೇನ್ ಮಾಡ್ತಿದಾರೆ ನೀವೆ ನೋಡಿ -

Labels: ರಾಜಕೀಯ